ಕಲಾವಿದರ ಕುಟುಂಬಗೀತೆ

ಕಲಾವಿದರ ಹಣೆಯಲ್ಲಿ ಮೂರನೆ ಕಣ್ಣೊಂದಿದೆ.
ಚಿಕ್ಕ ಮಣ್ಣಕಣದಲ್ಲೂ
ಬಣ್ಣದ ಕುಂಬಳ ಕಾಣುವ ಈ ವಿಚಿತ್ರ ಕಣ್ಣಿಗೆ
ಚಂದ್ರಮುಖದ ಹಳ್ಳಕೊಳ್ಳ
ಖಂಡಿತ ಕಾಣುತ್ತದೆ.
ಆಳಗಳನ್ನ ಮರೆಸಿ ಬೆಳದಿಂಗಳ ಮೆರೆಸಿ
ನಗುತ್ತ ಬಂದರೆ ಎದುರಿಗೆ ಸುಂದರಿ ಶೂರ್ಪನಖಿ,
ರಾಮಬುದ್ಧಿ ಅದರ ಹೊಂಚ
ಥಟ್ಟನೆ ಕಾಣುತ್ತದೆ,
ಲಕ್ಷ್ಮಣಕ್ರೌರ್‍ಯ, ರೇಗಿ ಮೂಗನೆ ಕೊಯ್ಯುತ್ತದೆ.
ಕೂಡಲೆ
ಧೋ ಎಂದು ದಡಗುಟ್ಟಿ ಸುರಿಯುತ್ತದೆ ಮಳೆ
ಹರಿಯುತ್ತದೆ ಹೊಳೆ
ತೇಲುತ್ತದೆ ಮನೆ ಮಠ ಸಮಸ್ತ ಇಳೆ.
ನಿಂತಾಗ ಆಕಾಶ ಶಾಂತವಾಗಿ ಭೂಮಿ ಹಸುರುಕ್ಕಿ ಹಾಡುತ್ತದೆ.
ಹೀಗೆ ಮಳೆಗಾಲ ಪ್ರತಿವರ್ಷ ಬರುತ್ತದೆ.

ಕಲಾವಿದರ ಎದೆಯಲ್ಲಿ ಒಂಟಿಹಕ್ಕಿ ಕೂತಿದೆ.
ತೆಪ್ಪನೆ ಕೂತ ಹಕ್ಕಿಗೆ
ಥಟ್ಟನೆ ಖುಷಿ ಹತ್ತಿ
ಕೂಗುತ್ತದೆ ಆಗೀಗ ಬಿರಿಯುವಂತೆ ಬೆಟ್ಟದ ನೆತ್ತಿ;
ನಡುಗುತ್ತದ ಕಡಲು
ನಡುಗುತ್ತದೆ ನೆಲದೊಡಲು
ಉಡುಗುತ್ತದೆ ಅವರೆದುರು ಎಲ್ಲ ದನಿ ಎಲ್ಲ ಗುಡುಗು ಸಿಡಿಲು;
ಹಾಕಿ ಮುಚ್ಚಿ ಮಾಡುತ್ತದೆ ಅದರಾಜ್ಞೆಗೆ
ಯಕ್ಷಲೋಕದ ಚಿನ್ನದ ಬಾಗಿಲು;
ಮನೆ ಮಠ ಎಲ್ಲ ತೃಣವಾಗಿ
ಕಾಣದ ಋಣದ ಸನ್ನೆಗೆ ಬಾಗಿ
ಹೊರಡುವ ಇವನ ಕವಿಯುತ್ತದೆ ಮರವೆಯ ಮುಗಿಲು
ಕಟ್ಟಿಕೊಂಡ ಲೋಕಭಾರವನ್ನ
ಕೊಡವಿ ಬಿಡುತ್ತದೆ ಬಗಲು;
ಆ ನಿರಾಸಕ್ತಿಗೆ ಬಾಗದು ಯಾವುದು?
ಬಾಗದೆ ಸಂಸಾರನೊಗದ ಒಂದು ಕೊನೆ ಹೊತ್ತ ಹೆಗಲು?

ಸರಿ, ನೆಪವೆತ್ತಿ
ಧೋ ಎಂದು ದಡಗುಟ್ಟಿ ಸುರಿಯುತ್ತದೆ ಮಳೆ,
ಹರಿಯುತ್ತದೆ ಹೊಳೆ
ತೇಲಿಸುತ್ತ ಮನೆ ಮಠ ಸಮಸ್ತ ಇಳೆ,
ಅಷ್ಟರಲ್ಲಿ
ಹಕ್ಕಿಕೂಗು ಚಿಕ್ಕೆಲೋಕ ಮುಟ್ಟುವಷ್ಟರಲ್ಲಿ
ಲೋಕದ ರಾಕ್ಷಸಕೇಕೆ
ಧಡಾಧಡಿ ನುಗ್ಗಿ
ಕತ್ತಿಗೆ ತೈತುಡುಕುತ್ತದೆ
ಕೊರಳಿಗೆ ಹಾವ ಬಿಗಿಯುತ್ತದೆ;
ಥಟ್ಟನೆ ಎಚ್ಚರಾಗಿ ಬಿಟ್ಟರೆ ಕಣ್ಣು
ಮನೆ ಮಠ ಮಡದಿ
ಮೂಲೆಯಲ್ಲಿ ನಗು ಚಿಮುಕಿಸಿ ನಿಂತಿರುವ ಬೆಳುದಿಂಗಳ ಹಣ್ಣು!
ಕೆಳಗಿಟ್ಟ ಗಂಟು ಮತ್ತೆ ಹಗಲೇರುತ್ತದೆ
ನಗಾರಿ ಭೇರಿ ನುಡಿಯ ತೊಡಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಶಸ್ಸು
Next post ತೆಂಕಣ ಗಾಳಿಯಾಟ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys